Friday, February 4, 2011

ಮನಸಿಗೆ ಬಹುಕಾಲ ಕಾಡಿದ ಕಥೆ – ’ತತ್ತ್ವಮಸಿ ಶ್ವೇತಕೇತು’

ಮನಸಿಗೆ ಬಹುಕಾಲ ಕಾಡಿದ ಕಥೆ – ’ತತ್ತ್ವಮಸಿ ಶ್ವೇತಕೇತು’

ಕೃಪೆ - ಓಶೋ

ಓರ್ವ ಸನ್ಯಾಸಿಯನ್ನು ಕೈತಪ್ಪಿ ಓರ್ವ ಸಿಪಾಯಿ ಭ್ರಾಂತಿವಶನಾಗಿ ಕೊಂದುಬಿಟ್ಟ. ೧೮೫೭ರ ಮಾತಿದು. ಕ್ರಾಂತಿಯ ದಿನಗಳು. ಓರ್ವ ಮೌನಿ ಸನ್ಯಾಸಿ ಬೆತ್ತಲೆಯಾಗಿ ಅಂಗ್ರೇಜರ ಪಾಳಯದಲ್ಲಿ ಹೋಗುತ್ತಿದ್ದ. ಸಿಪಾಯಿಗಳು ಆತನನ್ನು ಹಿಡಿದು ’ಯಾರು ನೀನು?’ ಎಂದು ಕೇಳಿದರು. ಆದರೆ ಅವನು ಮೌನಿ; ಉತ್ತರಿಸಲಿಲ್ಲ. ಉತ್ತರಿಸದಿದ್ದುದರಿಂದ ಆತನ ಮೇಲೆ ಸಂಶಯ ಹೆಚ್ಚಾಯಿತು. ಅವನ ಮೇಲೆ ಸಂದೇಹಿಸಿ ಓರ್ವ ಅಂಗ್ರೇಜಿ ಸಿಪಾಯಿ ಒಂದು ಭಲ್ಲೆಯನ್ನು ಆತನ ಎದೆಗೆ ಚುಚ್ಚಿದ. ಆ ಸನ್ಯಾಸಿ – ’ಸಾಯುವಾಗ ಮಾತ್ರ ಒಮ್ಮೆ ಮಾತಾಡುವೆ. ಅದಕ್ಕೆ ಮೊದಲು ಮಾತನಾಡುವುದಿಲ್ಲ’ ಎಂದು ವ್ರತ ತೊಟ್ಟಿದ್ದ. ಹಾಗೆಯೇ ಅವನು ಮೂವತ್ತು ವರ್ಷಗಳಿಂದ ಮೌನವನ್ನು ಸಾಧಿಸಿದ್ದ. ಎದೆಗೆ ಭಲ್ಲೆ ನಾಟಿಕೊಂಡೊಡನೆ ಎದೆಯಿಂದ ರಕ್ತದ ಕಾರಂಜಿ ಚಿಮ್ಮಿತು. ಆಗ ಅವನ ಬಾಯಿಂದ ’ತತ್ತ್ವಮಸಿ ಶ್ವೇತಕೇತು’ – ಎಂಬ ಉಪನಿಷದ್ವಚನ ಕೇಳಿಬಂತು. ’ಅಯ್ಯಾ ಶ್ವೇತಕೇತು! ನೀನು ಅವನೇ’ – ಎಂದಿದರ ಅರ್ಥ. ಕೂಡಲೇ ಜನ ಸೇರಿದರು. ’ಏನು ಹಾಗಂದರೆ?’ ಎಂದವರು ಕೇಳಿದರು. ಅದಕ್ಕೆ ಆ ಸನ್ಯಾಸಿ ಉತ್ತರಿಸಿದನಂತೆ – “ನನ್ನ ಉದ್ದೇಶವೆಂದರೆ, ಪರಮಾತ್ಮ ಯಾವ ರೂಪದಲ್ಲೇ ಬರಲಿ ನನಗೆ ಮೋಸ ಮಾಡಲು ಸಾಧ್ಯವಿಲ್ಲ. ಇಂದು ಅವನು ನನಗೆ ಭಲ್ಲೆಯಿಂದ ತಿವಿಯಲು ಬಂದಿರುವನು. ಕೈಯಲ್ಲಿ ಭಲ್ಲೆ ಇದೆ. ಅದರಿಂದ ನನ್ನ ಎದೆಯನ್ನು ತಿವಿಯುತ್ತಿರುವ. ಆದರೆ ನನಗೆ ಮೋಸ ಮಾಡಲು ಸಾಧ್ಯವಿಲ್ಲ. ಏಕೆಂದರೆ ನಾನು ನಿನ್ನನ್ನು ನೋಡುತ್ತಿರುವೆ. ಒಳಗೆ ನೀನೇ ಇರುವೆ - ತತ್ತ್ವಮಸಿ ಶ್ವೇತಕೇತು!” ಎದೆಯಿಂದ ರಕ್ತ ಬಸಿಯುತ್ತಿದ್ದರೂ ಆ ಸಂನ್ಯಾಸಿ ಕುಣಿಯುತ್ತಿದ್ದ. ಏಕೆಂದರೆ ಅವನು ತನ್ನನ್ನು ಕೊಲೆ ಮಾಡಿದವನಲ್ಲೂ ಪರಮಾತ್ಮನನ್ನು ಕಾಣಬಲ್ಲವನಾಗಿದ್ದ.

*********************************

[೨೩-೦೯-೨೦೦೭]

[ಭಜಗೋವಿಂದಮ್ ಸದ್ಗ್ರಂಥ – PP 29]

No comments:

Post a Comment